In October 2023, Sudama, a resident of Baliguda, Odisha, disappeared, leaving his family devastated. His parents had passed away, and his marriage had ended, leaving him with no support system. Despite filing a missing person’s complaint, his family had no updates for months, deepening their despair.
On October 13, 2024, Snehalaya’s dedicated team discovered Sudama in a distressed state. They brought him to their rehabilitation center on October 21, where he began receiving much-needed care. To ensure he could reconnect with his family, Snehalaya collaborated with the Shraddha Foundation, which facilitated the next steps.
Finally, on November 24, 2024, Sudama reunited with his brothers in Odisha. The moment was nothing short of miraculous. His brothers, overwhelmed with relief and happiness, welcomed him back with open arms. Neighbors, who had come to witness the reunion, shared in the family’s joy, creating a moment of collective celebration and closure.

ಭಾವನಾತ್ಮಕ ಪುನರ್ಮಿಲನ: ಒಂದು ವರ್ಷದ ಪ್ರತ್ಯೇಕತೆಯ ನಂತರ ಸುದಾಮ ಕುಟುಂಬದೊಂದಿಗೆ ಮತ್ತೆ ಒಂದಾಗುವ ಭಾವನಾತ್ಮಕ ಕ್ಷಣ
ಮಂಜೇಶ್ವರ: ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ನ ಅವಿರತ ಪ್ರಯತ್ನದಿಂದಾಗಿ ಒಂದು ವರ್ಷದಿಂದ ನಾಪತ್ತೆಯಾಗಿದ್ದ ಸುದಾಮ ಅವರು ಒಡಿಶಾದಲ್ಲಿರುವ ತನ್ನ ಸಹೋದರರೊಂದಿಗೆ ಯಶಸ್ವಿಯಾಗಿ ಮತ್ತೆ ಸೇರಿದ್ದಾರೆ. ಈ ಭಾವನಾತ್ಮಕ ಪುನರ್ಮಿಲನವು ಸಂತೋಷದ ಕಣ್ಣೀರನ್ನು ತಂದಿತು ಮಾತ್ರವಲ್ಲದೆ ಅವನ ಮರಳುವಿಕೆಗಾಗಿ ದೀರ್ಘಕಾಲ ಕಾಯುತ್ತಿದ್ದ ಕುಟುಂಬಕ್ಕೆ ಭರವಸೆಯ ಕ್ಷಣ ಇದಾಯಿತು.
ಒಡಿಶಾದ ಬಲಿಗುಡಾ ನಿವಾಸಿ ಸುದಾಮ ಅವರು ಅಕ್ಟೋಬರ್ 2023 ರಲ್ಲಿ ಕಣ್ಮರೆಯಾದರು, ಅವರ ಕುಟುಂಬವು ತೀವ್ರ ಹತಾಶೆಯಲ್ಲಿತ್ತು. ಅವನ ಹೆತ್ತವರು ತೀರಿಹೋಗಿದ್ದರಿಂದ ಮತ್ತು ಅವನ ವೈವಾಹಿಕ ಜೀವನವು ವಿಚ್ಛೇದನದಿಂದ ಬೇರ್ಪಟ್ಟ ಕಾರಣ ಅವನು ಸಂಪೂರ್ಣವಾಗಿ ಒಂಟಿಯಾಗಿದ್ದನು. ಇದರಿಂದ ಬೇಸತ್ತ ಸುದಾಮರವರು 2023 ನಾಪತ್ತೆಯಾದರು, ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು ಆದರೆ ಸುದಾಮರವರ ಸುಳಿವು ತಿಂಗಳುಗಳಾದರೂ ಯಾರಿಗೂ ಸಿಗಲಿಲ್ಲಾ.
ನಂತರ, ಅಕ್ಟೋಬರ್ 13, 2024 ರಂದು, ಸ್ನೇಹಾಲಯ ತಂಡವು ಸುದಾಮನನ್ನು ಸಂಕಷ್ಟದ ಸ್ಥಿತಿಯಲ್ಲಿ ಇರುವದನ್ನು ನೋಡಿ ಅಕ್ಟೋಬರ್ 21, 2024 ರಂದು ಸ್ನೇಹಾಲಯ ಪುನರ್ವಸತಿ ಕೇಂದ್ರಕ್ಕೆ ಕರೆತಂದರು. ಸ್ನೇಹಾಲಯದಲ್ಲಿ ಅವರಿಗೆ ಪ್ರೀತಿಯ ಆರೈಕೆ, ಮಾನಸಿಕ ಬೆಂಬಲ ಮತ್ತು ಸೂಕ್ತ ಚಿಕಿತ್ಸೆಯನ್ನು ಪಡೆದ ನಂತರ, ಅವರ ಕುಟುಂಬದೊಂದಿಗೆ ಅವರ ಪುನರ್ಮಿಲನಕ್ಕೆ ಅನುಕೂಲವಾಗುವಂತೆ ಅವರನ್ನು ಶ್ರದ್ಧಾ ಫೌಂಡೇಶನ್ಗೆ ವರ್ಗಾಯಿಸಲಾಯಿತು.
ನವೆಂಬರ್ 24, 2024 ರಂದು, ಬಹುನಿರೀಕ್ಷಿತ ದಿನವು ಸುದಾಮರವರ ಜೀವನದಲ್ಲಿ ಅಂತಿಮವಾಗಿ ಬಂದೆಬಿಟ್ಟಿತ್ತು.
ಈ ಪುನರ್ಮಿಲನವು ಪವಾಡಕ್ಕಿಂತ ಕಡಿಮೆ ಏನಲ್ಲ. ಕೆಟ್ಟದ್ದಕ್ಕೆ ಹೆದರಿದ ಸುದಾಮನ ಸಹೋದರರು ಸಮಾಧಾನದಿಂದ ಮುಳುಗಿದರು ಹಾಗೂ ಈ ಸಂತೋಷದ ಕ್ಷಣದಲ್ಲಿ ನೆರೆಹೊರೆಯವರು ಕೂಡ ಸಾಕ್ಷಿಯಾದರು.
ಸುದಾಮರಂತಹ ನಿಷ್ಕಲ್ಮಶವಾದ ಅನೇಕರನ್ನು ಪುನರ್ಜೀವನಕ್ಕೆ ತರುವ ಮತ್ತು ಕುಟುಂಬದೊಂದಿಗೆ ಪುನಃ ಸೇರಿಸುವ ಮತ್ತು ಸಮಾಜದಲ್ಲಿ ಪುನಃಸ್ಥಾಪನೆಗೆ ಸಹಾಯ ಮಾಡುವ ಈ ಸಂಸ್ಥೆಗಳು ಇನ್ನಷ್ಟು ಹುಟ್ಟಿಬರಲಿ.

One Response
Great work Snehalaya and team..